ಕರ್ಣ

ಸಿಕ್ಕೀತು ಹೇಗೆ ಕರ್ಣನಿಗೆ
ಈ ನಾಡ ಸಿಂಹಾಸನ!
ಹೆತ್ತ ತಾಯಿಯೆ ತೇಲಿಬಿಟ್ಟಳು-
ನೀರ ಮೇಲಿನ ಪಯಣ.

ಮೀನುಗಳು ಮುತ್ತಿಟ್ಟವು
ಮೊಸಳೆಗಳು ಮುಟ್ಟವು
ಅಲೆಯ ಮೇಲಿನ ಬಾಳು
ಆಸೆಗಳು ಹುಟ್ಟವು.

ಒಬ್ಬನಿಗೆ ಹೃದಯಕಳಶ
ಇನ್ನೊಬ್ಬನಿಗೆ ಮೈಯ ಕವಚ
ಕರ್ಣಕುಂಡಲಕ್ಕೂ ಬಿತ್ತು ದಾನದ ಕತ್ತಿ
ಮಾರಿಕೊಳ್ಳದ ಮನಸು
ಕನ್ನಡದ ಕರ್ಣಕನಸು
ಬತ್ತಿಹೋಗದ ಒರತ ಜೀವಶಕ್ತಿ.

ಕಣ್ಣಪಟ್ಟಿಯ ಕುರುಕ್ಷೇತ್ರದಲ್ಲಿ
ಕರ್ಣ ರಥವ ಹತ್ತಿದ;
ವರ್ಣ ಪಥವ ಮೀರಿ ಮಿಂಚಿ
ಕೃಷ್ಣಗೀತೆ ಕೇಳಿ ಸಟೆದ
ಪಾರ್ಥನಿಗೆ ದಕ್ಕಿದ.

ಭಾರತದ ಭೂಪಟದಲ್ಲಿ ನಮ್ಮ ನಾಡ ಕರ್ಣ
ಯಾರು ಕೃಷ್ಣ ಯಾರು ಪಾರ್ಥ
ಕರ್ಣರಥಕೆ ಕೆಂಪು ಕೆಸರು
ಎದ್ದು ನಿಂತ ಸ್ವಾರ್ಥ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣಾಗಿ ಜನ್ಮನೀಡಿ
Next post ಬಂಜೆಯ ಬಯಕೆ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys